ಬೆಂಗಳೂರಿನ ಬೀದಿಗಳಲ್ಲಿ ದಳಪತಿ ವಿಜಯೋತ್ಸವ: ಕೇಕ್ ಕಟ್ , ಪಟಾಕಿ ಸಿಡಿಸಿ ಫ್ಯಾನ್ಸ್ ಸಂಭ್ರಮ! | Thalapathy Vijay
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ 'ತಮಿழக ವೆಟ್ರಿ ಕಳಗಂ' (TVK) ಪಕ್ಷದ ಐತಿಹಾಸಿಕ ಗೆಲುವಿನ ಅಲೆ ಗಡಿ ದಾಟಿ ಬೆಂಗಳೂರಿಗೂ ತಲುಪಿದೆ. ತಮಿಳುನಾಡಿನಲ್ಲಿ ವಿಜಯ್ ಸಿಎಂ ಆಗುವುದು ಖಚಿತವಾಗುತ್ತಿದ್ದಂತೆ, ಇತ್ತ ಬೆಂಗಳೂರಿನಲ್ಲಿ ನೆಲೆಸಿರುವ ತಮಿಳು ಭಾಷಿಕರು ಹಾಗೂ ವಿಜಯ್ ಅಭಿಮಾನಿಗಳು ಬೀದಿಗಿಳಿದು ಭರ್ಜರಿ ವಿಜಯೋತ್ಸವ ಆಚರಿಸಿದ್ದಾರೆ. ಬೆಂಗಳೂರಿನ ವಿವಿಧೆಡೆ ಫ್ಯಾನ್ಸ್ ಬೃಹತ್ ಹಾರಗಳನ್ನು ಹಾಕಿ, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚುವ ಮೂಲಕ ತಮ್ಮ ನೆಚ್ಚಿನ ನಾಯಕನ ರಾಜಕೀಯ ದಿಗ್ವಿಜಯವನ್ನು ಸಂಭ್ರಮಿಸಿದ್ದಾರೆ. ರಾಜಧಾನಿಯ ಬೀದಿಗಳಲ್ಲಿ ನಡೆದ ಈ ಅದ್ಧೂರಿ ಸಂಭ್ರಮಾಚರಣೆಯ ದೃಶ್ಯಗಳನ್ನು ಈ ವಿಡಿಯೋದಲ್ಲಿ ಕಣ್ತುಂಬಿಕೊಳ್ಳಿ.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ 'ತಮಿழக ವೆಟ್ರಿ ಕಳಗಂ' (TVK) ಪಕ್ಷದ ಐತಿಹಾಸಿಕ ಗೆಲುವಿನ ಅಲೆ ಗಡಿ ದಾಟಿ ಬೆಂಗಳೂರಿಗೂ ತಲುಪಿದೆ. ತಮಿಳುನಾಡಿನಲ್ಲಿ ವಿಜಯ್ ಸಿಎಂ ಆಗುವುದು ಖಚಿತವಾಗುತ್ತಿದ್ದಂತೆ, ಇತ್ತ ಬೆಂಗಳೂರಿನಲ್ಲಿ ನೆಲೆಸಿರುವ ತಮಿಳು ಭಾಷಿಕರು ಹಾಗೂ ವಿಜಯ್ ಅಭಿಮಾನಿಗಳು ಬೀದಿಗಿಳಿದು ಭರ್ಜರಿ ವಿಜಯೋತ್ಸವ ಆಚರಿಸಿದ್ದಾರೆ. ಬೆಂಗಳೂರಿನ ವಿವಿಧೆಡೆ ಫ್ಯಾನ್ಸ್ ಬೃಹತ್ ಹಾರಗಳನ್ನು ಹಾಕಿ, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚುವ ಮೂಲಕ ತಮ್ಮ ನೆಚ್ಚಿನ ನಾಯಕನ ರಾಜಕೀಯ ದಿಗ್ವಿಜಯವನ್ನು ಸಂಭ್ರಮಿಸಿದ್ದಾರೆ. ರಾಜಧಾನಿಯ ಬೀದಿಗಳಲ್ಲಿ ನಡೆದ ಈ ಅದ್ಧೂರಿ ಸಂಭ್ರಮಾಚರಣೆಯ ದೃಶ್ಯಗಳನ್ನು ಈ ವಿಡಿಯೋದಲ್ಲಿ ಕಣ್ತುಂಬಿಕೊಳ್ಳಿ.

