LIVE | ಬಿಡದಿ ಭೂಸ್ವಾಧೀನಕ್ಕೆ ವಿರೋಧ; ಬೈರಮಂಗಲದಿಂದ ಫ್ರೀಡಂ ಪಾರ್ಕ್‌ವರೆಗೆ ಜೆಡಿಎಸ್ ಪಾದಯಾತ್ರೆ

18 July 2026 1:37 PM IST  ( Updated:2026-07-22 04:53:31  )

ಬಿಡದಿ ಟೌನ್‌ಶಿಪ್ ಯೋಜನೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಜನತಾ ದಳ (ಜಾತ್ಯತೀತ) ಮೂರು ದಿನಗಳ ಪಾದಯಾತ್ರೆಯನ್ನು ಘೋಷಿಸಿದೆ.

ಬಿಡದಿ ಟೌನ್‌ಶಿಪ್ ಯೋಜನೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಜನತಾ ದಳ (ಜಾತ್ಯತೀತ) ಮೂರು ದಿನಗಳ ಪಾದಯಾತ್ರೆಯನ್ನು ಘೋಷಿಸಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜುಲೈ 30ರಿಂದ ಈ ಪಾದಯಾತ್ರೆ ಆರಂಭವಾಗಲಿದೆ. ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ನಡೆಯಲಿರುವ ಈ ಪಾದಯಾತ್ರೆಯ ಮೂಲಕ ರೈತರ ಹಕ್ಕುಗಳು, ಭೂಸ್ವಾಧೀನ ವಿರೋಧ ಹಾಗೂ ಸರ್ಕಾರದ ನೀತಿಗಳ ವಿರುದ್ಧ ಧ್ವನಿ ಎತ್ತಲು ಜೆಡಿಎಸ್ ನಿರ್ಧರಿಸಿದೆ. ಈ ಹೋರಾಟ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.