
ಕೇಂದ್ರ ಸಚಿವ ಜಾರ್ಜ್ ಕುರಿಯನ್
ಮೋದಿ ಸಂಪುಟದ ಏಕೈಕ ಕ್ರಿಶ್ಚಿಯನ್ ಸಚಿವ ರಾಜೀನಾಮೆ
ಕುರಿಯನ್ ಅವರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜೊತೆಗೆ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಕೇಂದ್ರ ರಾಜ್ಯ ಸಚಿವರಾಗಿಯೂ ಹೆಚ್ಚುವರಿ ಜವಾಬ್ದಾರಿ ನಿಭಾಯಿಸುತ್ತಿದ್ದರು.
ಮೋದಿ ಸಂಪುಟದ ಏಕೈಕ ಕ್ರಿಶ್ಚಿಯನ್
ಜಾರ್ಜ್ ಕುರಿಯನ್ ಅವರು ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಕ್ರಿಶ್ಚಿಯನ್ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಏಕೈಕ ಸಚಿವರಾಗಿದ್ದರು ಎಂಬುದು ಇಲ್ಲಿ ಗಮನಾರ್ಹ. ಕೇಂದ್ರ ಇಲಾಖೆಯ ಇಬ್ಬರು ಪ್ರಮುಖ ರಾಜ್ಯ ಸಚಿವರಾದ ರವನೀತ್ ಸಿಂಗ್ ಬಿಟ್ಟು ಹಾಗೂ ಜಾರ್ಜ್ ಕುರಿಯನ್ ಅವರ ಅವಧಿ ಮುಗಿಯುತ್ತಿದ್ದರೂ, ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಗೆ ಇವರಿಬ್ಬರನ್ನೂ ಮರುನಾಮಕರಣ ಮಾಡಲು ಬಿಜೆಪಿ ಒಲವು ತೋರಿರಲಿಲ್ಲ. ಸಂವಿಧಾನದ ನಿಯಮಗಳ ಪ್ರಕಾರ ಸಂಸತ್ತಿನ ಯಾವುದೇ ಸದನದ (ಲೋಕಸಭೆ ಅಥವಾ ರಾಜ್ಯಸಭೆ) ಸದಸ್ಯರಲ್ಲದವರು ಸಚಿವರಾಗಿ ಮುಂದುವರಿಯಲು ಸಾಧ್ಯವಿಲ್ಲದ ಕಾರಣ, ಅವಧಿ ಮುಗಿಯುತ್ತಿದ್ದಂತೆ ಕುರಿಯನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

